deshadoothanews

*ಮುಂಗಾರು ಹಂಗಾಮಿನಲ್ಲಿ ಬೆಳೆವಿಮೆ ನೋಂದಾಯಿಸಲು ರೈತರಿಗೆ ಅವಕಾಶ*

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಕೊಪ್ಪಳ :
2023-24ನೇ ಸಾಲಿನ ಬೆಳೆವಿಮೆ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆವಿಮೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.

 

2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆ ಚಾಲ್ತಿ ಇದ್ದು, ಬೆಳೆ ವಿಮೆ ಯೋಜನೆಯಡಿ ಹತ್ತಿ (ನೀರಾವರಿ) ಮತ್ತು ಹೆಸರು (ಮಳೆಯಾಶ್ರೀತ) ಬೆಳೆಗಳಿಗೆ ಬೆಳೆವಿಮೆ ನೋಂದಾಯಿಸಲು ಜುಲೈ 15 ಹಾಗೂ ಇತರೆ ಎಲ್ಲಾ ಅಧಿಸೂಚಿತ ಬೆಳೆಗಳಿಗೆ ನೋಂದಾಯಿಸಲು ಜುಲೈ 31 ಕೊನೆಯ ದಿನಾಂಕವಾಗಿರುತ್ತದೆ. ಆದಕಾರಣ ಕೂಡಲೇ ರೈತ ಬಾಂಧವರು ಬೆಳೆವಿಮೆ ನೋಂದಾಯಿಸಿ ಯೋಜನೆಯ ಲಾಭ ಪಡೆಯಲು ತಿಳಿಸಿದೆ. ಬೆಳೆ ವಿಮೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯಲು ಕೊಪ್ಪಳ ಜಿಲ್ಲೆಗೆ ಆಯ್ಕೆಯಾದ ಪ್ಯೂಚರ್ ಜನರಲಿ ಇನ್ರ್ಸರೇನ್ಸ್ ಕಂಪನಿಯ ಪ್ರತಿನಿಧಿಗಳನ್ನು ಸಂಪರ್ಕಿಸಬಹುದಾಗಿದೆ. ಈ ಇನ್ಸೂರೇನ್ಸ್ ಕಂಪನಿಯ ಪ್ರತಿನಿಧಿಗಳು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಲ್ಲಿ ಲಭ್ಯ ಇದ್ದು, ರೈತರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾರೆ.

 

*ಇನ್ಸೂರೇನ್ಸ್ ಕಂಪನಿಯ ಪ್ರತಿನಿಧಿಗಳ ವಿವರ:*  ರೈತರು ಆಯಾ ತಾಲ್ಲೂಕುವಾರು ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳನ್ನು ದೂರವಾಣಿ ಮೂಲಕ ಅಥವಾ ಖುದ್ದಾಗಿ ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ. ಕೊಪ್ಪಳ ತಾಲೂಕಿಗೆ ಶ್ರೀ ಸತೀಶ ಸುರೊಜಿ ಮೊ: 8861468340., ಕುಷ್ಟಗಿ ತಾಲೂಕಿಗೆ ಶ್ರೀ ಸುನೀಲ್ ಇಟಿನಿ ಮೊ:7996453241., ಯಲಬುರ್ಗಾ ತಾಲೂಕಿಗೆ ಶ್ರೀ ಸಂಗಪ್ಪ ಬೆಣ್ಣಿ ಮೊ:9964397577., ಗಂಗಾವತಿ ತಾಲೂಕಿಗೆ ಶ್ರೀ ವಿಶಾಲ್ ಹೆದ್ ಮೊ: 9008078851., ಕಾರಟಗಿ ತಾಲೂಕಿಗೆ ಶ್ರೀ ಮಹೇಂದ್ರ ಎಸ್ ಮೊ: 9590642324., ಕನಕಗಿರಿ ತಾಲೂಕಿಗೆ ಶ್ರೀ ಚಂದ್ರಶೇಖರ ಮೊ: 9611682356., ಕುಕನೂರು ತಾಲೂಕಿಗೆ ಶ್ರೀ ಕಳಕಪ್ಪ ಕಮತಗಿ 8497074017 ಅವರಿಗೆ ಸಂಪರ್ಕಿಸಬಹುದಾಗಿದೆ.

 

ಪ್ಯೂಚರ್ ಜನರಲಿ ಇನ್ಸೂರೆನ್ಸ್ ಕಂಪನಿಯ ಕೊಪ್ಪಳ ಜಿಲ್ಲೆಯ ಪ್ರಧಾನ ಕಚೇರಿಯು ಬ್ಯಾಂಕ್ ಆಫ್ ಬರೋಡಾ ಪಕ್ಕದಲ್ಲಿ, ನಾಸವಾಲೆ ಬಿಲ್ಡಿಂಗ್, 1ನೇ ಮಹಡಿ, ಕೊಪ್ಪಳದಲ್ಲಿ ಇದ್ದು ರೈತ ಬಾಂಧವರು ನೇರವಾಗಿ ಸಹಿತ ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave A Reply

Your email address will not be published.