deshadoothanews

ಸಾಂಸ್ಕೃತಿಕ ಸಂಘ ಸಂಸ್ಥೆಗಳಿಂದ ಸರ್ಕಾರಕ್ಕೆ ಖಾರವಾದ ಮನವಿ

ಡಿ ಡಿ ನ್ಯೂಸ್. ರಾಜ್ಯ

0

ಡಿ ಡಿ ನ್ಯೂಸ್. ರಾಜ್ಯ

ಧನಸಹಾಯದ ವಿಚಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರುಗಳು ಕರ್ತವ್ಯ ಲೋಪದಿಂದಾಗಿ ಬೆಳಗಾವಿ ಹಾಗೂ ಕಾರವಾರ ಜಿಲ್ಲೆಗಳ ಸಂಘ ಸಂಸ್ಥೆಗಳಿಗೆ ಧನಸಹಾಯ ಮಂಜೂರು ಆಗದಿರುವ ಹಿನ್ನೆಲೆಯಲ್ಲಿ ಇಂದು ಬೆಳಗಾವಿ ಮತ್ತು ಕಾರವಾರದಿಂದ ಆಗಮಿಸಿದ್ದ ಸಾಂಸ್ಕೃತಿಕ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಹೋರಾಟಗಾರರಾದ ಡಾ. ಜಯಸಿಂಹ ರಾಜೇಗೌಡ.

ಮಹೇಶ್ ಬಾಬು ಸುರ್ವೆ. ಹೊನ್ನಿಗಾನಹಳ್ಳಿ ಸಿದ್ದರಾಜಯ್ಯ
ಶಾಂತಕುಮಾರ್ ಪೂಜಾ ಕುಣಿತ ಕಲಾವಿದ ಮಂಡ್ಯ ಸಿದ್ದೆಗೌಡ ಮರಿದೇವರು ಇತರರು ಸೇರಿಕೊಂಡು ಸರ್ಕಾರಕ್ಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಬೆಳಗಾವಿ ಮತ್ತು ಕಾರವಾರ ಜಿಲ್ಲೆಗಳ ಸಂಘ ಸಂಸ್ಥೆಗಳಿಗೆ ದನಸಹಾಯ ಮಂಜೂರು ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಲಾಯಿತು.


ಇದರೊಂದಿಗೆ ಇರುವ ಜಂಟಿ ನಿರ್ದೇಶಕರುಗಳ ಇಲ್ಲಿರುವ ದೂರುಗಳನ್ನು ಪರಿಗಣಿಸಿ ತನಿಖೆ ಮಾಡಿ ನಂತರ ಬೇರೆ ಸ್ಥಳಕ್ಕೆ ವಗಾ೯ವಣೆ ಮಾಡಲು ಆಗ್ರಹಿಸಲಾಯಿತು.

ಅಲ್ಲದೆ ಬೆಂಗಳೂರು ಹಬ್ಬದಲ್ಲಿ ನಡೆದಂತಹ ಭ್ರಷ್ಟಾಚಾರವನ್ನು ತನಿಖೆ ಮಾಡಲು ದೂರು ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ನಿರ್ದೇಶಕರಾದ ಶ್ರೀ ವಿಶ್ವನಾಥ್ ಹಿರೇಮಠ್ ರವರು ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹೆಚ್ಚಿನ ಮಾಹಿತಿಗಾಗಿ
ಡಾ.ಜಯಸಿಂಹ ಎಸ್.
ಕಲಾ ಸಂಘಟಕರು

Leave A Reply

Your email address will not be published.