200ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಕೊಪ್ಪಳ: ವಿಧಾನಸಭಾ ಕ್ಷೇತ್ರದ ಬಿಸರಳ್ಳಿ ಗ್ರಾಮದ 200 ಕ್ಕೂ ಹೆಚ್ಚು ಯುವಕರು, ಮುಖಂಡರು ಕಾರ್ಯಕರ್ತರು ಸಂಸದ ಕರಡಿ ಸಂಗಣ್ಣ ಅವರ ನೇತೃತ್ವದಲ್ಲಿ ಭಾನುವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಗ್ರಾಮ ಪಂಚಾಯತಿ ಮಾಜಿ ಸದಸ್ಯ ವನಕೆರಪ್ಪ ಗಂಡಾಳಿ, ಮಂಜುನಾಥ್ ಎಲ್. ಜಾಲಿಹಾಳ್, ಮುನೇಶ್ ಕುಟಗನಹಳ್ಳಿ, ಮೌನೇಶ್ ಮೂಗುತಿ, ಮೌನೇಶ್ ಮದಕಟ್ಟಿ, ಮಂಜುನಾಥ್ ಚೊಳಚಗುಡ್ಡ, ಪರಶುರಾಮ್ ಹುಲ್ಲೂರು, ಪರಶುರಾಮ್ ಮ್ಯಾಗಳಮನಿ, ಪ್ರಕಾಶ್  ಆರ್ ಸಿಂದೋಗಿ, ಗಣೇಶ್ ಕಮ್ಮರ್‌ ಸೇರಿದಂತೆ ಮುಖಂಡರು ಕಾಂಗ್ರೆಸ್ ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ(ಬಿ ಜೆ ಪಿ) ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ವೀರೇಶ ಸಜ್ಜನ್, ಕೆಡಿಪಿ ಸದಸ್ಯ ಭರಮಣ್ಣ, ಗ್ರಾಮ ಪಂಚಾಯತಿ ಸದಸ್ಯ ಅಂದಪ್ಪ ಚಿಲಗೋಡ್, ಬಿಜೆಪಿ ಯುವ ಮುಖಂಡ ಅಜೇಯಗೌಡ ಪಾಟೀಲ್, ರಮೇಶ್‌ರೆಡ್ಡಿ, ಪ್ರಕಾಶ ಕೊಪ್ಪದ್, ಮುಖಂಡರಾದ ಪಾಂಡು ಬೋಡಿನ್,ಈರಪ್ಪ ತಳಕಳ್  ಹಾಗೂ ಗ್ರಾಮದ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥತರಿದ್ದರು.
Comments (0)
Add Comment