ಬಸವಣ್ಣ ಪುತ್ಥಳಿಗೆ ಸಂಸದರಿಂದ ಪುಷ್ಪನಮನ

ಕೊಪ್ಪಳ: ನಗರದ ಬಸವೇಶ್ವರ ಸರ್ಕಲ್(ಗಂಜ್) ಬಳಿ ಇರುವ ಬಸವಣ್ಣ ಪುತ್ಥಳಿಗೆ ಸಂಸದ ಕರಡಿ ಸಂಗಣ್ಣ ಅವರು ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.
ಭಾನುವಾರ ಬೆಳಗ್ಗೆ ಬಸವೇಶ್ವರ ಸರ್ಕಲ್ ಗೆ ಸಂಸದರು ಭೇಟಿ ನೀಡಿ ಪುತ್ಥಳಿಗೆ ನಮಸ್ಕರಿಸಿದರು. ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಅವರು ಜತೆಗಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಸುನೀಲ್ ಹೆಸರೂರು, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವಾಣಿ ಶ್ರೀಮಠ, ಮಹಿಳಾ ಕಾರ್ಯಕರ್ತೆ ಶೋಭಾ ನಗರಿ, ಮುಖಂಡರಾದ ವಸಂತ ನಾಯಕ ಸೇರಿ ಮತ್ತಿತರರಿದ್ದರು.
Comments (0)
Add Comment