ಯಲಬುರ್ಗಾ ಭಗವಂತ ಸುಂದರವಾದ ಪರಿಸರ ಪ್ರಕೃತಿಯನ್ಬು ನಮಗೆಲ್ಲರಿಗೂ ಕೊಟ್ಟಿರುತ್ತಾನೆ, ಆ ಭಗವಂತನ ಉಪಕಾರವನ್ನು ನಾವುಗಳು ಸದಾ ಸ್ಮರಿಸುವ ಕಾಯಕ ನಮ್ಮದಾಗಬೇಕು ಎಂದು ಮಕ್ಕಳ್ಳಿಯ ಶಿವಾನಂದ ಸ್ವಾಮೀಜಿ ಅವರು ಆಗಿ ಹುಣ್ಣಿಮೇಯ ದಿನದ 81ನೇ ಶಿವಾನುಭವ ಗೋಷ್ಠಿಯಲ್ಲಿ ದಿವ್ಯ ಸಾನಿದ್ಯವಹಿಸಿ ಮಾತನಾಡಿ, ಇನ್ನೋಬ್ಬರಿಗೆ ಕೆಡಕನ್ನು ಬಯಸದೆ ,ಅವರ ಮನಸ್ಸಿಗೆ ನೂವುಂಟು ಮಾಡಲಾರದೆ ಒಳಿತು ಮಾಡುವ ಕಾರ್ಯಮಾಡುವಲ್ಲಿ ಮುಂದಾಗಬೇಕು ಎಂದರು.
ದಮ್ಮೂರಿನ ಶ್ರೀ ಭೀಮಾಂಬಿಕಾದೇವಿ ಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮರಮಠ ಸಾನಿದ್ಯವಹಿಸಿದ್ದರು.
ಭಕ್ತನಾದೋಡೆ ಬಾಳೆಹಣ್ಣಿನಂತೆ ಇರಬೇಕು ಎಂಬ ವಚನದ ಸಾರಂಶದ ಬಗ್ಗೆ ಹಿರೇವಂಕಲಕುಂಟಾದ ಯೋಗ ಗುರು ಹರ್ಷಾನಂದ ಅವರು ಮಾತನಾಡಿ ಮಕ್ಕಳು ಶಿಕ್ಷಣದೊಂದಿಗೆ ಸಂಸ್ಕಾರವಂತರಾಗಬೇಕು ಶಿಕ್ಷಣ ಕಲಿತ ಮಕ್ಕಳು ಹಾಳಗ ಬಹುದು ಸಂಸ್ಕಾರ ಕಲಿತ ಮಕ್ಕಳು ಎಂದು ಹಾಳಗುವದಿಲ್ಲ ಎಂದರು. ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸಿಮಿತವಾಗಬಾರದು ,ಗುರು ಹಿರಿಯಲ್ಲಿ ವಿನಯದಿಂದ ಬಾಗಿದಾಗ ಉನ್ನಮಟ್ಟದಲ್ಲಿ ಬೆಳೆಯಲು ಸಾದ್ಯ ಎಂದು ದಮ್ಮೂರ ಶ್ರೀ ಭೀಮಾಂಬಿಕಾದೇವಿ ಶಿವಾನುಭವ ಸೇವಾ ಸಮಿತಿ ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಸಂಪನ್ಮೂಲ ವ್ಯಕ್ತಿ ಭೀಮಣ್ಣ ಹವಳಿ ಮಾತನಾಡಿದರು. ಭಕ್ತನಾದೋಡೆ ಬೆಲ್ಲದ ಕುಳ್ಳಿಯಂತಿರಬೇಕು ಎಂದು ವಚನದ ಸಾರಂಶದ ಬಗ್ಗೆ ತರ್ಲಕಟ್ಟಿಯ ಮುದಿಯಪ್ಪ ಮೇಟಿ ಅವರು ಮಾತನಾಡಿದರು.
ಈ ವೇಳೆ ಶರಣರಾದ ಶಂಕರಗೌಡ ಮಾಲಿಪಾಟೀಲ್, ನೀಲನಗೌಡ ಹೊಸಮನಿ,ನಿಂಗಪ್ಪ ಹಳ್ಳಿಕೇರಿ,ದುರಗಪ್ಪ ಮಕ್ಕಳ್ಳಿ, ಮಳಿಯಪ್ಪಯ್ಯ, ಅಲಿಸಾಬ ನದಾಫ್, ಹುಸೇನಸಾಬ ಹಿರೇಕೊಪ್ಪ,ಚಂದ್ರಶೇಖರ ಕೋಗಿಲೆ,ಶರಣಯ್ಯ ಬಳಗನೂರ,, ದೇವಪ್ಪ ಹಡಪದ, ಪಾಲಕ್ಷಪ್ಪ ಪತ್ತಾರ , ನಾಗನಗೌಡ ಮಾಲಿಪಾಟೀಲ್,ಸಂಗಪ್ಪ ಹುಣಸಿಹಾಳ,ಫಕೀರಗೌಡ ಮಾ.ಪಾಟೀಲ, ಮರೆಗೌಡ ಸಂಗನಾಳ, ಬಾಳಪ್ಪ ಜರಕುಂಟಿ, ಹನುಮಪ್ಪ ರಾವಣಕಿ, ಯಮನಗೌಡ್ರ ಮಾಲಿ ಪಾಟೀಲ ,ಕಾವೇರಿ ನಾವಡೆ, ಅಂಬಿಕಾ ಎನ್,ಶರಣಪ್ಪ ಭೂತಲ್, ಕಾಳೇಶ ಕಮ್ಮಾರ,, ಷಣ್ಮೂಖಪ್ಪ ಕೋವಿ,ಗುನ್ನೇಪ್ಪ ಚೆನ್ನದಾಸರ ಸೇರಿದಂತೆ ಇತರರು ಇದ್ದರು.
